ಮಲ್ಪೆಯ ಮೀನುಗಾರಿಕಾ ದೋಣಿ ಭಟ್ಕಳ ಬಳಿಯ ಕರಾವಳಿಯಲ್ಲಿ ಬಂಡೆಗಳಿಗೆ ಡಿಕ್ಕಿ ; ಅಪಾರ ನಷ್ಟ

Source: SOnews | By Staff Correspondent | Published on 7th September 2024, 1:38 PM | Coastal News |

ಭಟ್ಕಳ : ಅರಬ್ಬೀ ಸಮುದ್ರದಲ್ಲಿ ಎದ್ದಿರುವ ಬಲವಾದ ಅಲೆಗಳಿಂದ ಮಲ್ಪೆಯ ಮೀನುಗಾರಿಕಾ ದೋಣಿಯೊಂದು ಭಟ್ಕಳ ಬಳಿಯ ಕರಾವಳಿಯಲ್ಲಿ ಬಂಡೆಗಳಿಗೆ ಡಿಕ್ಕಿ ಹೊಡೆದು ದೋಣಿಗೆ ಭಾರೀ ಹಾನಿಯಾಗಿದೆ ಎಂದು ವರದಿಯಾಗಿದೆ.

ಕಡಲತೀರದಲ್ಲಿ ಬಲವಾದ ಅಲೆಗಳ ಅಬ್ಬರಕ್ಕೆ ಮಲ್ಪೆ ಬಂದರಿಗೆ ಸೇರಿದ ದೋಣಿಯ ರೆಕ್ಕೆಯೊಳಗೆ ಮೀನುಗಾರಿಕಾ ಬಲೆ ಸಿಲುಕಿಕೊಂಡ ಪರಿಣಾಮ  ಬೋಟ್ ಮುಂದಕ್ಕೆ ಸಾಗಲು ಸಾಧ್ಯವಾಗದೆ ಬೋಟ್ ಸಮುದ್ರದಲ್ಲಿ ಮುಳುಗುವ ಹಂತದಲ್ಲಿತ್ತು ಎಂದು ಹೇಳಲಾಗುತ್ತಿದೆ.

ದೋಣಿಯನ್ನು ಮುಳುಗದಂತೆ ರಕ್ಷಿಸಲು ಭಟ್ಕಳದಿಂದ ಬಂದ ಇನ್ನೊಂದು ಮೀನುಗಾರಿಕಾ ದೋಣಿಗೆ ಹಗ್ಗದಿಂದ ಕಟ್ಟಿ ಭಟ್ಕಳ ತಂಗಿನ ಗುಂಡಿ ಬಂದರಿನ ಬಳಿ ಎಳೆದು ತರಲಾಯಿತು. ಆದರೆ ಬಲವಾದ ಅಲೆಗಳಿಂದಾಗಿ ಕಟ್ಟಿದ ಹಗ್ಗಗಳು ಮುರಿದು ದಡದ ಉದ್ದಕ್ಕೂ ತಡೆಗೋಡೆಯಂತೆ ಕಾರ್ಯನಿರ್ವಹಿಸುವ ಬೃಹತ್ ಬಂಡೆಗಳಿಗೆ ದೋಣಿ ಡಿಕ್ಕಿ ಹೊಡೆದಿದೆ. ಇದರಿಂದ ದೋಣಿಗೆ ಸಾಕಷ್ಟು ಹಾನಿಯಾಗಿದೆ ಎಂದು ತಿಳಿದುಬಂದಿದೆ.

Read These Next

ಪ್ರವಾದಿ ಮುಹಮ್ಮದ್ ರನ್ನು ಮುಸ್ಲಿಮ್ ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸುವುದು ಬೇಡ- ಪ್ರೋ. ಆರ್.ಎಸ್.ನಾಯಕ

ಭಟ್ಕಳ: ಪ್ರವಾದಿ ಮುಹಮ್ಮದ್ ರು ಎಲ್ಲ ಸಮುದಾಯಕ್ಕಾಗಿ ಬಂದ ಪ್ರವಾದಿಯಾಗಿದ್ದು ಅವರನ್ನೂ ಕೇವಲ ಮುಸ್ಲಿಮ್ ಸಮುದಾಯಕ್ಕಾಗಿ ಮಾತ್ರ ...

ಉತ್ತರ ಕನ್ನಡದಲ್ಲಿ ಆಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಣೆ; 253 ಕಿಮೀ ಉದ್ದದ ಮಾನವ ಸರಪಳಿ ನಿರ್ಮಾಣ

ಪ್ರಜಾಪ್ರಭುತ್ವದ ಆಶಯಗಳಿಗೆ ಪ್ರಜಾಪ್ರಭುತ್ವ ವಿರೋಧಿಗಳಿಂದ ಯಾವುದೇ ಧಕ್ಕೆಯಾಗದಂತೆ ಪ್ರತಿಯೊಬ್ಬ ಸಾರ್ವಜನಿಕರ ಕೂಡಾ ...