ಭಟ್ಕಳ, ಯಲ್ವಡಿಕಾವೂರ ಪಂಚಾಯತ್ ವ್ಯಾಪ್ತಿಯ ಬೆಣಂದೂರು ಸಮೀಪದಲ್ಲಿ ಗರ್ಭಿಣಿ ಕಡವೆಯನ್ನು ಕೊಲೆ ಮಾಡಿ, ಅದರ ತಲೆ ಹಾಗೂ ಹೊಟ್ಟೆಯಲ್ಲಿದ್ದ ಎರಡು ಭ್ರೂಣಗಳನ್ನು ಸ್ಥಳದಲ್ಲೇ ಬಿಟ್ಟು, ಮಾಂಸವನ್ನು ಸಾಗಾಟ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.
ಮೇವು ತರಲು ಕಾಡಿಗೆ ಹೋಗಿದ್ದ ಮಹಿಳೆ ಈ ಘಟನೆಗೆ ಸಾಕ್ಷಿಯಾಗಿದ್ದಾರೆ. ಸ್ಥಳೀಯ ನಾಗೇಂದ್ರ ನಾಯ್ಕ ಹಾಗೂ ಯುವಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ ಬಳಿಕ, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.